ನಮನ ಫಿಂಸ್ ಅವರ ಎಂ.ರುದ್ರೇಶ್ ಅರ್ಪಿಸುವ ಅಣಜಿ ನಾಗರಾಜ್ ಅವರ ಮತ್ತೊಂದು ಕನ್ನಡ ಸಿನಿಮಾ ’ಗುಬ್ಬಿ’ - ಗೂಡು ಬಿಟ್ರೂ ಗುರಿ ಬಿಡಲ್ಲ...... ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದು ವಿಜಯ್ ಅವರ ಚೊಚ್ಚಲ ನಿರ್ದೇಶನದ ಚಿತ್ರ. ಬಿಡುಗಡೆಗೂ ಮುಂಚೆ ತಮಿಳು ಭಾಷೆಗೆ ಮಾರಾಟವಾಗಿರುವ ಚಿತ್ರ. ಛಾಯಾಗ್ರಾಹಕರಾಗಿ ನಿರ್ಮಾಪಕರಾಗಿ ಅಣಜಿ ನಾಗರಾಜ್ ಹೊಸ ತಂಡದ ಮೇಲೆ ಭರವಸೆಯನ್ನಿಟ್ಟು ತಯಾರಿಸಿರುವ ಚಿತ್ರ ೫ ಸ್ನೇಹಿತರ ಜೀವನದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದೆ. ನಾಯಕ ಅಜಿತ್ಗೆ ಎದುರಾದ ಸಮಸ್ಯೆಗೆ ಅವನ ೪ ಸ್ನೇಹಿತರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುವರು ಎಂಬುದು ಕಥಾ ಹಂದರ.
ತಾರಾಗಣದಲ್ಲಿ ಪಟ್ರೆ ಲವ್ಸ ಪದ್ಮ ಖ್ಯಾತಿಯ ಅಜಿತ್, ಪ್ರಥಮ ಬಾರಿಗೆ ನಾಯಕಿಯಾಗಿ ರಿಮಾ ವೋರ ಜೊತೆಗೆ ಗಿರಿ, ವಿಶ್ವ, ದೀಪಕ್, ಕೈಲಾಶ್, ಬಾಬ್ಬಿ, ಅಚ್ಯುತ್ ರಾವ್, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ, ಮೈಕೊ ನಾಗರಾಜ್, ವೀಣಾ ಸುಂದರ್ ಹಾಗೂ ಇನ್ನಿತರರು ಇದ್ದಾರೆ.
ಅರ್ಜುನ್ರವರ ಸಂಗೀತ, ಎಂ.ಆರ್.ಸೀನುರವರ ಛಾಯಾಗ್ರಹಣ, ಮಳವಳ್ಳಿ ಸಾಯಿಕೃಷ್ಣ ಅವರ ಸಂಭಾಷಣೆ, ಶ್ರೀನಿವಾಸ್ ಪಿ. ಬಾಬು ಸಂಕಲನ, ನಾಗೇಶ್ ಹಾಗೂ ರಾಜ್ ಕಲೈ ಅವರ ನೃತ್ಯ ನಿರ್ದೇಶನ, ರವಿವರ್ಮ, ಡಿಫರೆಂಟ್ ಡ್ಯಾನಿ, ಮಾಸ್ ಮಾದ ಸಾಹಸ, ಪ್ರಭು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ..